34.1 C
Udupi
Friday, April 10, 2026
spot_img
spot_img
HomeBlogದ್ವಿತೀಯ ಪಿಯುಸಿ ಫಲಿತಾಂಶ ಜ್ಞಾನಸುಧಾದ 49 ವಿದ್ಯಾರ್ಥಿಗಳಿಗೆ 590ಕ್ಕಿಂತ ಅಧಿಕ ಅಂಕ

ದ್ವಿತೀಯ ಪಿಯುಸಿ ಫಲಿತಾಂಶ ಜ್ಞಾನಸುಧಾದ 49 ವಿದ್ಯಾರ್ಥಿಗಳಿಗೆ 590ಕ್ಕಿಂತ ಅಧಿಕ ಅಂಕ

🔴ವಿಜ್ಞಾನ ವಿಭಾಗದಲ್ಲಿ ಮೂವರು ತಲಾ 597 ಅಂಕದೊಂದಿಗೆ “ರಾಜ್ಯಕ್ಕೆ ತೃತೀಯ ಸ್ಥಾನ”

🔴ಜ್ಞಾನಸುಧಾದ ಮೂರು ಸಂಸ್ಥೆಗಳಲ್ಲೂ, ಶೇ.100 ಫಲಿತಾಂಶ 966 ವಿದ್ಯಾರ್ಥಿಗಳಲ್ಲಿ 888 ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 49 ವಿದ್ಯಾರ್ಥಿಗಳು ಮೊದಲ ಹತ್ತು ರ‍್ಯಾಂಕ್ ಗಳಿಸಿದ್ದು, ಕಾರ್ಕಳ ಜ್ಞಾನಸುಧಾದ ವಿಜ್ಞಾನ ವಿಭಾಗದ ಚೈತ್ರಿಕಾ ಚೌದರಿ, ವೈಷ್ಣವಿ ಕುಲಕರ್ಣಿ ಹಾಗೂ ಉಡುಪಿ ಜ್ಞಾನಸುಧಾದ ಆರ್ನವಿ ತಲಾ 597 ಅಂಕ ಪಡೆದು ರಾಜ್ಯಕ್ಕೆ 3ನೇ ಸ್ಥಾನದೊಂದಿಗೆ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನಿಗಳಾಗಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಸಾನ್ವಿ ದಿನೇಶ್ 595 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನವನ್ನು ಪಡೆದಿರುತ್ತಾರೆ.

ಕಾರ್ಕಳ ಜ್ಞಾನಸುಧಾ, ಉಡುಪಿ ಜ್ಞಾನಸುಧಾ ಹಾಗೂ ಮಣಿಪಾಲ ಜ್ಞಾನಸುಧಾವು ಶೇ.100 ಫಲಿತಾಂಶವನ್ನು ಪಡೆದಿದ್ದು, ಒಟ್ಟು 966 ವಿದ್ಯಾರ್ಥಿಗಳಲ್ಲಿ 888 (91.93%) ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಫಲಿತಾಂಶವನ್ನು ದಾಖಲಿಸಿಕೊಂಡಿದ್ದಾರೆ.

ವಿಜ್ಞಾನ ವಿಭಾಗ

1. ಚೈತ್ರಿಕಾ ಚೌದರಿ – 597 (ರಾಜ್ಯಕ್ಕೆ 3ನೇ ಸ್ಥಾನ ಜಿಲ್ಲೆಗೆ ದ್ವಿತೀಯ ಸ್ಥಾನ)

2. ವೈಷ್ಣವಿ ಕುಲಕರ್ಣಿ – 597 (ರಾಜ್ಯಕ್ಕೆ 3ನೇ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ)

3. ಆರ್ನವಿ – 597 (ರಾಜ್ಯಕ್ಕೆ 3ನೇ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ)

4. ಅಶ್ವಿನ್ ವಿ ಶೆಟ್ಟಿ – 596 (ರಾಜ್ಯಕ್ಕೆ 4ನೇ ಸ್ಥಾನ, ಜಿಲ್ಲೆಗೆ ತೃತೀಯ ಸ್ಥಾನ)

5. ಪ್ರತ್ವಿತಾ ಪಿ ಶೆಟ್ಟಿ – 596 (ರಾಜ್ಯಕ್ಕೆ 4ನೇ ಸ್ಥಾನ, ಜಿಲ್ಲೆಗೆ ತೃತೀಯ ಸ್ಥಾನ)

6. ಸಮ್ವಿದ್ ದಿನೇಶ್ ನಾಯಕ್ – 594 (ರಾಜ್ಯಕ್ಕೆ 6ನೇ ಸ್ಥಾನ)

7. ನಿಶ್ಮಿತಾ – 594 (ರಾಜ್ಯಕ್ಕೆ 6ನೇ ಸ್ಥಾನ)

8. ಶ್ರೀ ರಾಮ್ ಕೆ ಹೆಬ್ಬಾರ್ 594 (ರಾಜ್ಯಕ್ಕೆ 6ನೇ ಸ್ಥಾನ)

9. ಪಿ ಅಖಿಲ್ ಶರ್ಮಾ -594 (ರಾಜ್ಯಕ್ಕೆ 6ನೇ ಸ್ಥಾನ)

10. ಭುವನಶ್ರೀ -593 (ರಾಜ್ಯಕ್ಕೆ 7ನೇ ಸ್ಥಾನ)

11. ಸಹನ ಎನ್ -593 (ರಾಜ್ಯಕ್ಕೆ 7ನೇ ಸ್ಥಾನ)

12. ಚಿನ್ಮಯೀ ಭಟ್ -593 (ರಾಜ್ಯಕ್ಕೆ 7ನೇ ಸ್ಥಾನ)

13. ಪರ್ಣಿಕಾ – 593 (ರಾಜ್ಯಕ್ಕೆ 7ನೇ ಸ್ಥಾನ)

14. ಅಮೃತವರ್ಷಣಿ ಎನ್ ಜಿ – 592 (ರಾಜ್ಯಕ್ಕೆ 8ನೇ ಸ್ಥಾನ)

15. ಕನಿಷ್ಕ್ ಅಮಿನ್ – 592 (ರಾಜ್ಯಕ್ಕೆ 8ನೇ ಸ್ಥಾನ)

16. ನವಮಿ ಎನ್ -592 (ರಾಜ್ಯಕ್ಕೆ 8ನೇ ಸ್ಥಾನ)

17. ನಿಶಾನ್ ಎನ್ ಸಾಲ್ಯಾನ್ – 592 (ರಾಜ್ಯಕ್ಕೆ 8ನೇ ಸ್ಥಾನ)

18. ಪರಿಣಿತ ಎಸ್ – 592 (ರಾಜ್ಯಕ್ಕೆ 8ನೇ ಸ್ಥಾನ)

19. ಪ್ರೀತಮ್ ಕೆ ಎಂ – 592 (ರಾಜ್ಯಕ್ಕೆ 8ನೇ ಸ್ಥಾನ)

20. ಯಶಸ್ವಿನಿ ಎ. ಬಿ – 592 (ರಾಜ್ಯಕ್ಕೆ 8ನೇ ಸ್ಥಾನ)

21. ಆಕಾಶ್ ಶೆಟ್ಟಿ – 591 (ರಾಜ್ಯಕ್ಕೆ 9ನೇ ಸ್ಥಾನ)

22. ಚೈತನ್ಯ ಎಚ್ ಎಂ – 591 (ರಾಜ್ಯಕ್ಕೆ 9ನೇ ಸ್ಥಾನ)

23. ದಿಗಂತ್ ಎಸ್ – 591 (ರಾಜ್ಯಕ್ಕೆ 9ನೇ ಸ್ಥಾನ)

24. ಕುನಾಲ್ ಆರ್ ಗೌಡ – 591 (ರಾಜ್ಯಕ್ಕೆ 9ನೇ ಸ್ಥಾನ)

25. ಪ್ರಜ್ಞಾ – 591 (ರಾಜ್ಯಕ್ಕೆ 9ನೇ ಸ್ಥಾನ)

26. ಈಶ್ವರಿ ಬಿ ಶೇಟ್ – 591 (ರಾಜ್ಯಕ್ಕೆ 9ನೇ ಸ್ಥಾನ)

27. ಸಿದ್ಧಾಂತ್ ಎನ್. ಜಿ – 591 (ರಾಜ್ಯಕ್ಕೆ 9ನೇ ಸ್ಥಾನ)

28. ಮಹಿಮಾ – 591 (ರಾಜ್ಯಕ್ಕೆ 9ನೇ ಸ್ಥಾನ)

29. ಶ್ರೀಯಾ ಎಸ್ ಆಚಾರ್ -591 (ರಾಜ್ಯಕ್ಕೆ 9ನೇ ಸ್ಥಾನ)

30. ಆರ್ಯ ನಾರಾಯನ್ ಜಿ.ಎಲ್- 590 (ರಾಜ್ಯಕ್ಕೆ 10ನೇ ಸ್ಥಾನ)

31. ಭಾವನ ಡಿ. ಎಸ್ – 590 (ರಾಜ್ಯಕ್ಕೆ 10ನೇ ಸ್ಥಾನ)

32. ಪ್ರಣವ್ ಎಂ ಯು -590 (ರಾಜ್ಯಕ್ಕೆ 10ನೇ ಸ್ಥಾನ)

33. ಪ್ರಶ್ಮಾ ಕಾಮತ್ -590 (ರಾಜ್ಯಕ್ಕೆ 10ನೇ ಸ್ಥಾನ)

34. ಸಮನ್ವಿತಾ ಎಚ್ ಆರ್ -590 (ರಾಜ್ಯಕ್ಕೆ 10ನೇ ಸ್ಥಾನ)

35. ಸಂಪ್ರೀತಾ ಭಟ್ – 590 (ರಾಜ್ಯಕ್ಕೆ 10ನೇ ಸ್ಥಾನ)

36. ಶರಧಿ ಶೆಟ್ಟಿ – 590 (ರಾಜ್ಯಕ್ಕೆ 10ನೇ ಸ್ಥಾನ)

37. ಶಿವಾನಿ ಬಿ,ಎನ್ -590 (ರಾಜ್ಯಕ್ಕೆ 10ನೇ ಸ್ಥಾನ)

38. ಸುಜಲ್ ದೀಪಕ್ ಕೆ- 590 (ರಾಜ್ಯಕ್ಕೆ 10ನೇ ಸ್ಥಾನ)

39. ಸುಶಾಂತ್ ತಿಮ್ಮನವರ್ – 590 (ರಾಜ್ಯಕ್ಕೆ 10ನೇ ಸ್ಥಾನ)

40. ವಿಜೇತ ಪುಟ್ಟಪ್ಪ ಗೌಡರ್ – 590 (ರಾಜ್ಯಕ್ಕೆ 10ನೇ ಸ್ಥಾನ)

41. ದೀಪಶ್ರೀ ರಮೇಶ್ ಎಸ್ – 590 (ರಾಜ್ಯಕ್ಕೆ 10ನೇ ಸ್ಥಾನ)

42. ಡೆಲಿಷಿಯಾ ಎಂ – 590 (ರಾಜ್ಯಕ್ಕೆ 10ನೇ ಸ್ಥಾನ)

43. ಪ್ರಗತಿ ಎಲ್ – 590 (ರಾಜ್ಯಕ್ಕೆ 10ನೇ ಸ್ಥಾನ)

44. ಪ್ರಥ್ವೀಧರ ಎಲ್ ಕೆ. – 590 (ರಾಜ್ಯಕ್ಕೆ 10ನೇ ಸ್ಥಾನ) ಅಂಕ ಗಳಿಸಿರುತ್ತಾರೆ.

ವಾಣಿಜ್ಯ ವಿಭಾಗ :

ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದದಲ್ಲಿ ಕಾರ್ಕಳ ಜ್ಞಾನಸುಧಾದ ಸಾನ್ವಿ ದಿನೇಶ್ 595 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ, ಚಾನ್ವಿ 593 ಅಂಕ ಪಡೆದು ರಾಜ್ಯಕ್ಕೆ 8ನೇ ಸ್ಥಾನ, ಪ್ರಥುಲ್ ಡಿ’ಸೋಜಾ 592 ಅಂಕ ಪಡೆದು ರಾಜ್ಯಕ್ಕೆ 9ನೇ ಸ್ಥಾನ, ಮಣಿಪಾಲ ಜ್ಞಾನಸುಧಾದ ರಕ್ಷಿತ್ 592 ಅಂಕ ಪಡೆದು ರಾಜ್ಯಕ್ಕೆ 9ನೇ ಸ್ಥಾನ ಹಾಗೂ ಸಜನ್ 591 ಅಂಕ ಪಡೆದು ರಾಜ್ಯಕ್ಕೆ 10ನೇ ಸ್ಥಾನ ಗಳಿಸಿರುತ್ತಾರೆ.ಪರೀಕ್ಷೆ ಬರೆದ ಜ್ಞಾನಸುಧಾದ 79 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯ ಫಲಿತಾಂಶ ತನ್ನದಾಗಿಸಿಕೊಂಡಿದ್ದಾರೆ.

1. ಸಾನ್ವಿ ದಿನೇಶ್ – 595 (ರಾಜ್ಯಕ್ಕೆ 6ನೇ ಸ್ಥಾನ)

2. ಚಾನ್ವಿ – 593 (ರಾಜ್ಯಕ್ಕೆ 8ನೇ ಸ್ಥಾನ)

3. ಪ್ರಥುಲ್ ಡಿ’ಸೋಜಾ – 592 (ರಾಜ್ಯಕ್ಕೆ 9ನೇ ಸ್ಥಾನ)

4. ರಕ್ಷಿತ್ – 592 (ರಾಜ್ಯಕ್ಕೆ 9ನೇ ಸ್ಥಾನ)

5. ಸಜನ್ – 591 (ರಾಜ್ಯಕ್ಕೆ 10ನೇ ಸ್ಥಾನ)

ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 523 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 500 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 52 ವಿದ್ಯಾರ್ಥಿಗಳ್ಲಿ 48 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ಉಡುಪಿ ಜ್ಞಾನಸುಧಾದ ವಿಜ್ಞಾನ ವಿಭಾಗದಲ್ಲಿ 209 ವಿದ್ಯಾರ್ಥಿಗಳಲ್ಲಿ 182 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 27 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಮಣಿಪಾಲ ಜ್ಞಾನಸುಧಾದ ವಿಜ್ಞಾನ ವಿಭಾಗದಲ್ಲಿ 155 ವಿದ್ಯಾರ್ಥಿಗಳಲ್ಲಿ 137 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 18 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 27 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ.

ಕಾರ್ಕಳ ಜ್ಞಾನಸುಧಾ, ಉಡುಪಿ ಜ್ಞಾನಸುಧಾ ಹಾಗೂ ಮಣಿಪಾಲ್ ಜ್ಞಾನಸುಧಾದ ಒಟ್ಟು 966 ವಿದ್ಯಾರ್ಥಿಗಳಲ್ಲಿ 888 (91.93%) ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ದಾಖಲೆಯ ಫಲಿತಾಂಶವನ್ನು ತನ್ನದಾಗಿಸಿಕೊಂಡಿದ್ದು, ವಿಷಯವಾರು ಪೂರ್ಣಾಂಕದಲ್ಲಿ ಗಣಿತಶಾಸ್ತ್ರ-292, ಜೀವಶಾಸ್ತ್ರ ದಲ್ಲಿ-22, ರಸಾಯನಶಾಸ್ತ್ರ -11, ಭೌತಶಾಸ್ತ್ರ-89, ಸಂಖ್ಯಾಶಾಸ್ತ್ರ-42, ಗಣಕಶಾಸ್ತ್ರ-123, ಲೆಕ್ಕಶಾಸ್ತ್ರ-13, ವ್ಯವಹಾರ ಅಧ್ಯಯನದಲ್ಲಿ-19, ಸಂಸ್ಕೃತ-186, ಕನ್ನಡ-4, ಅರ್ಥಶಾಸ್ತ್ರ-4, ಹಿಂದಿ-9 ಸೇರಿದಂತೆ 814 ಉತ್ತರ ಪತ್ರಿಕೆಗಳಿಗೆ ಪೂರ್ಣಾಂಕ ಬಂದಿರುತ್ತದೆ.

ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page