30.6 C
Udupi
Saturday, January 31, 2026
spot_img
spot_img
HomeBlogಟ್ವೀಟ್ ಅಲ್ಲ, ಚರ್ಚೆಗೆ ಬನ್ನಿ – ಮೋಹನ್‌ದಾಸ್ ಪೈಗೆ ರಾಮಲಿಂಗ ರೆಡ್ಡಿ ತಿರುಗೇಟು

ಟ್ವೀಟ್ ಅಲ್ಲ, ಚರ್ಚೆಗೆ ಬನ್ನಿ – ಮೋಹನ್‌ದಾಸ್ ಪೈಗೆ ರಾಮಲಿಂಗ ರೆಡ್ಡಿ ತಿರುಗೇಟು

ಬೆಂಗಳೂರು: ಉದ್ಯಮಿ ಮೋಹನ್‌ದಾಸ್ ಪೈ, ರಸ್ತೆ ಗುಂಡಿಗಳ ವಿಷಯದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದು ಇದೀಗ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸ್ಥಿತಿಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡಿರುವ ಅವರು, “ಸಾರಿಗೆ ಸಚಿವರಾಗಿ ನಿಮ್ಮ ನೀತಿ ಮತ್ತು ಕಾರ್ಯಪದ್ಧತಿಯಿಂದ ಸಮರ್ಪಕ ಸಾರಿಗೆ ವ್ಯವಸ್ಥೆ ಒದಗಿಸುವಲ್ಲಿ ವಿಫಲರಾಗಿದ್ದೀರಿ. ಖಾಸಗಿ ವಲಯಕ್ಕೆ ಅವಕಾಶ ನೀಡಬೇಕು” ಎಂದು ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಾರಿಗೆ ವ್ಯವಸ್ಥೆ ಹಿಂಜರಿದಿದ್ದು, ಬಸ್ಸುಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಪೈ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ಟೀಕೆಗೆ ತೀವ್ರ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, “ಯಾವುದೇ ವೇದಿಕೆಯಲ್ಲಿ ನಿಮ್ಮೊಂದಿಗೆ ಮುಖಾಮುಖಿ ಚರ್ಚೆಗೆ ನಾವು ಸಿದ್ಧ. ಈ ವಿಚಾರದಲ್ಲಿ ನಮ್ಮ ಬಿಎಂಟಿಸಿ ಎಂಡಿಯವರೇ ಸಾಕು. ದಯವಿಟ್ಟು ಬಂದು ವಾಸ್ತವಾಂಶಗಳನ್ನು ನೇರವಾಗಿ ಪರಿಶೀಲಿಸಿ ಚರ್ಚಿಸಿ. ನೀವು ಚರ್ಚೆಗೆ ಬರುತ್ತೀರಾ, ಅಥವಾ ಟ್ವೀಟ್‌ಗಳಲ್ಲೇ ಸೀಮಿತವಾಗುತ್ತೀರಾ?” ಎಂದು ಪ್ರಶ್ನಿಸಿರುವ ಅವರು ಪೈ ಅವರ ದೃಷ್ಟಿಕೋನ ಕೇವಲ ಪಕ್ಷಪಾತವಲ್ಲ, ಅದು ಮೂಲಭೂತ ಸಿದ್ಧಾಂತವಾಗಿದೆ ಎಂದು ಹೇಳಿದರು.

“ನೀವು ಸಾರ್ವಜನಿಕ ಸೇವೆಯನ್ನು ಲಾಭ–ನಷ್ಟದ ಹಂಗಿನಲ್ಲಿ ನೋಡುತ್ತೀರಿ, ಆದರೆ ನಾವು ಅದನ್ನು ಸಾರ್ವಜನಿಕ ಸಾರಿಗೆ ಸೇವೆಯಾಗಿ ಪರಿಗಣಿಸುತ್ತೇವೆ. ಮಹಿಳೆಯರಿಗೆ ಒಟ್ಟು 650 ಕೋಟಿ ರೂಪಾಯಿ ಮೌಲ್ಯದ ಉಚಿತ ಟಿಕೆಟ್ ಸೌಲಭ್ಯ ನೀಡಲಾಗಿದೆ. ಶಕ್ತಿ ಯೋಜನೆ ಎಂದರೆ ಕೇವಲ ಒಂದು ಯೋಜನೆಯಲ್ಲ, ಇದು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆರ್ಥಿಕ ಸಬಲೀಕರಣದ ಹೆಜ್ಜೆಯಾಗಿದೆ” ಎಂದು ವಿವರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page