ಬೀಡಿನಗುಡ್ಡೆ ಮೈದಾನ ಉಡುಪಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಜೇಸಿಐ ಕಾರ್ಕಳ ಪ್ರಥಮ

ಜೇಸಿಐ ಕಾರ್ಕಳದ ಆತಿಥ್ಯದಲ್ಲಿ ವಲಯ 15 ರ ಪ್ರಪ್ರಥಮ ಕ್ರಿಕೆಟ್ ಪಂದ್ಯಾಟ ರೈಸ್ ಅಪ್ ಟ್ರೋಫಿ 2025 ವರ್ಷನ್ 1.0 ಬೀಡಿನಗುಡ್ಡೆ ಮೈದಾನ ಉಡುಪಿ ಇಲ್ಲಿ ಮೇ 10 ಮತ್ತು 11 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಲಯ ಅಧ್ಯಕ್ಷರಾದ ಜೇಸಿಐ ಸೆನೆಟರ್ ಅಭಿಲಾಶ್ ಬಿ ಎ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷರು ಹಾಗೂ ಪೂರ್ವ ವಲಯ ಅಧಿಕಾರಿ ಜೇಸಿ ಪದ್ಮಪ್ರಸಾದ್ ಜೈನ್ ವಲಯದ ಕಾರ್ಯಕ್ರಮ ಆಯೋಜನೆಗೆ ಶುಭವನ್ನು ಹಾರೈಸಿ ತಂಡದ ಸದಸ್ಯರಿಗೆ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪೋರ್ಟ್ಸ್ ಆಂಡ್ ಕಲ್ಚರಲ್ ವಿಭಾಗದ ಸಂಯೋಜಕರಾದ ಜೇಸಿ ಪ್ರಚೀತ್ ಕುಮಾರ್ ಅವರು ವಹಿಸಿದ್ದರು.
ರೈಸ್ ಅಪ್ ಟ್ರೋಫಿ 2025 – ವಿನ್ನರ್ ಜೇಸಿಐ ಕಾರ್ಕಳ ಹಾಗೂ ರನ್ನರ್ ಆಗಿ ಜೇಸಿಐ ಕಡಬ ಕದಂಬ ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ Pr and Marketing ZD ಜೇಸಿ ರಾಕೇಶ್ ಹೊಸಬೆಟ್ಟು , ZVP ಜೇಸಿ ಅನ್ವೆಷ್ , ಅತಿಥೇಯ ಘಟಕ ಜೇಸಿಐ ಕಾರ್ಕಳದ ಅಧ್ಯಕ್ಷರಾದ ಜೇಸಿ ಶ್ವೇತಾ ಎಸ್ ಜೈನ್, ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಸುಶಾಂತ್ ಶೆಟ್ಟಿ, ವಲಯ ಉಪಾಧ್ಯಕ್ಷರು, ವಲಯ ಅಧಿಕಾರಿಗಳು, ಘಟಕಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

