
ಸ್ವಚ್ಛ ಕಾರ್ಕಳ ಬ್ರಿಗೇಡ್ ನೇತೃತ್ವದಲ್ಲಿ ಇಂದು ದಿನಾಂಕ 07-09-2025 ರಂದು ನಡೆದ ಗೋವಿಗಾಗಿ ಮೇವು ಕಾರ್ಯಕ್ರಮದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು – ಮುಂಬೈ ಸಂಘದ ಸದಸ್ಯರು ಭಾಗಿಯಾಗಿ ಶ್ರಮದಾನದ ಮೂಲಕ ಕುಕ್ಕುಂದೂರು ತೋಟಗಾರಿಕಾ ಇಲಾಖೆಯ ತೋಟದಿಂದ ಹುಲ್ಲನ್ನು ಕತ್ತರಿಸಿ ಟಿಪ್ಪರ್ ಮೂಲಕ ನೀಲಾವರ ಗೋ ಶಾಲೆಗೆ ನೀಡಲಾಯಿತು.

ಸ್ವಚ್ಛ ಕಾರ್ಕಳ ಬ್ರಿಗೇಡ್ ನೇತೃತ್ವದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು – ಮುಂಬೈ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಕಳ, ಶ್ರೀ ಲಕ್ಷ್ಮಿ ಗೆಳೆಯರ ಬಳಗ, ದುರ್ಗಾ ಸೇತುವೆ – ಕಾವೇರಡ್ಕ ಸಂಘದ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.
