18.8 C
Udupi
Wednesday, December 24, 2025
spot_img
spot_img
HomeBlogಕುಕ್ಕುಂದೂರು ಗ್ರಾಮದ ಪರಪ್ಪು ನಿವಾಸಿ ಸುಬ್ರಹ್ಮಣ್ಯ ಸಾಲ್ಯಾನ್ ನ ಶವ ಪತ್ತೆ

ಕುಕ್ಕುಂದೂರು ಗ್ರಾಮದ ಪರಪ್ಪು ನಿವಾಸಿ ಸುಬ್ರಹ್ಮಣ್ಯ ಸಾಲ್ಯಾನ್ ನ ಶವ ಪತ್ತೆ

ಪರಪು ಸೇತುವೆ ಬಳಿ ನಿಯಂತ್ರಣ ತಪ್ಪಿ ಸ್ಕೂಟಿ ಸಹಿತ ಹೊಳೆಗೆ ಬಿದ್ದಿರುವ ಶಂಕೆ..!

ಕಾರ್ಕಳ: ಕುಕ್ಕುಂದೂರು ಗ್ರಾಮದ ಪರಪ್ಪು ನಿವಾಸಿ, ನಕ್ರೆ ಘಟಕದ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ಸುಬ್ರಹ್ಮಣ್ಯ ಸಾಲ್ಯಾನ್ ಅವರ ಶವ ಪರಪ್ಪು ಸೇತುವೆ ಕೆಳಗೆ ಪತ್ತೆಯಾಗಿದೆ.

ಸಾಮಾಜಿಕ, ಧಾರ್ಮಿಕವಾಗಿ ತೊಡಗಿಸಿಕೊಂಡಿದ್ದ ಸುಬ್ರಹ್ಮಣ್ಯ ಸಾಲಿಯಾನ್ ಅವರ ಮೊಬೈಲ್ ಶನಿವಾರ ಸಂಜೆಯಿಂದ ಸ್ವಿಚ್ ಅಪ್ ಆಗಿದ್ದು ಸಂಬಂಧಿಕರು, ಸ್ನೇಹಿತರು ಹುಡುಕಾಟ ನಡೆಸಿ ನಗರ ಠಾಣೆಗೂ ದೂರು ನೀಡಿದ್ದರು.

ರವಿವಾರ ಘಟನೆ ಬೆಳಕಿಗೆ ಬಂದಿದ್ದು ,ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ಕೆಳಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸಂಭ್ರಮದ ಖುಷಿಯಲ್ಲಿ ಮಗುವಿಗೆ ಐಸ್ ಕ್ರೀ ತರಲು ಮನೆಯಿಂದ ಹೊರಗಡೆ ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಅವಘಡ ಸಂಭವಿಸಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.

ಮೃತರು ತಾಯಿ ತಂಗಿ ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page