
ದಿನಾಂಕ 16.11.2025 ರಿಂದ 21.11.2025 ರವರೆಗೆ ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ), ಶ್ರೀ ಬಿ ಮಂಜುನಾಥ ಪೈ ಸಂಸ್ಕೃತಿಕ ಸಭಾ ಭವನ ಕಾರ್ಕಳ ಇದರ ಸಹಯೋಗದಲ್ಲಿ ಸಾರ್ವಜನಿಕ ಗೀತಾ ಜಯಂತಿ ಆಚರಣೆ ಸಲುವಾಗಿ ಶ್ರೀಮದ್ ಭಗವದ್ಗೀತಾ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ನ. 16ರಂದು ಡಾ|| ವಿನಾಯಕ ಭಟ್ ಗಾಳಿಮನೆ, ನ.17 ರಂದು ಶ್ರೀ ಮುನಿರಾಜ ರೆಂಜಾಳ, ನ. 18ರಂದು ಶಂಕರನಾರಾಯಣ ಭಟ್, ನ. 19 ರಂದು ಅನಂತಪದ್ಮನಾಭ ಭಟ್, ನ. 20 ರಂದು ಸುಮಂತ ಜೋಶಿ, ನ. 21 ರಂದು ಡಾ| ರಾಘವೇಂದ್ರ ರಾವ್ ಪ್ರವಚನ ನೀಡಲಿದ್ದಾರೆ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಸರ್ವರಿಗೂ ಆಹ್ವಾನಿಸಲಾಗಿದೆ.
ಸ್ಥಳ: ಶ್ರೀ ಶಾರದಾ ಮಂಜುನಾಥ ಪೈ ಹಾಲ್
ಸಮಯ: ಸಾಯಂಕಾಲ 5:30 ರಿಂದ 6:45 ರವರೆಗೆ.






