
ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 14/01/2026 ರಂದು ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದ ಉದ್ದೇಶವು ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಹಬ್ಬಗಳ ಮಹತ್ವದ ಅರಿವನ್ನು ಮೂಡಿಸುವುದಾಗಿದೆ.
ಕಾರ್ಯಕ್ರಮದ ಅಂಗವಾಗಿ ಶಾಲಾ ಪ್ರಾಂಶುಪಾಲರು ಮಕ್ಕಳಿಗೆ ಮಕರ ಸಂಕ್ರಾಂತಿ ಹಬ್ಬದ ಮಹತ್ವ, ಅದರ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ವಿಶೇಷತೆಯನ್ನು ವಿವರಿಸಿದರು. ಬಳಿಕ ಮಕ್ಕಳು ಸ್ವತಃ ಗಾಳಿಪಟಗಳನ್ನು ತಯಾರಿಸಿ, ಅದರ ಮೇಲೆ ತಮ್ಮ ಭವಿಷ್ಯದ ಕನಸುಗಳನ್ನು ಮತ್ತು ಆಶಯಗಳನ್ನು ಬರೆದು ಗಾಳಿಪಟ ಹಾರಿಸುವ ಮೂಲಕ ಈ ಹಬ್ಬದಲ್ಲಿ ಸಂತೋಷದಿಂದ ಭಾಗವಹಿಸಿದರು.
ಈ ಸಂಭ್ರಮಾಚರಣೆಯ ಅಂಗವಾಗಿ ಸಾಂಪ್ರದಾಯಿಕ ಪೊಂಗಲನ್ನು ತಯಾರಿಸಿ ಹಬ್ಬದ ಸೊಗಡನ್ನು ಹೆಚ್ಚಿಸಲಾಯಿತು. ಮಕ್ಕಳಿಗೆ ಎಳ್ಳು–ಬೆಲ್ಲವನ್ನು ವಿತರಿಸುವ ಮೂಲಕ ಪರಸ್ಪರ ಪ್ರೀತಿ, ಸೌಹಾರ್ದ ಮನೋಭಾವನೆಯನ್ನು ಬೆಳೆಸಲಾಯಿತು.
ಮಕರ ಸಂಕ್ರಾಂತಿ ದಿನಾಚರಣೆ ಹಬ್ಬದಲ್ಲಿ ಮಕ್ಕಳು ಹರ್ಷದಿಂದ ಪಾಲ್ಗೊಳ್ಳುವುದಲ್ಲದೆ, ಹಬ್ಬದ ಮಹತ್ವವನ್ನು ಅರ್ಥಪೂರ್ಣವಾಗಿ ತಿಳಿದುಕೊಂಡರು.



















