ರತನ್ ಟಾಟಾರವರ ಶ್ರದ್ಧಾಂಜಲಿ ಸಭೆ

ವರ್ಧಮಾನ ವಿದ್ಯಾ ಸಂಸ್ಥೆ – ಮಹಾನ್ ದಾನಿ ಹಾಗೂ ಉದ್ಯಮಿ ಸರ್ ರತನ್ ಟಾಟಾ ಅವರ ಪುಣ್ಯಸ್ಮರಣೆಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು. ಈ ಸಂದರ್ಭ ಸ್ಕೌಟ್ಸ್, ಗೈಡ್ಸ್, ಕಬ್ ಹಾಗೂ ಬುಲ್ಬುಲ್ ವಿದ್ಯಾರ್ಥಿಗಳು ಭಾಗವಹಿಸಿದ್ದು ಅವರ ಅಸಾಧಾರಣ ಜೀವನಮೌಲ್ಯಗಳನ್ನು ಸ್ಮರಿಸಿದರು. ಸರ್ ರತನ್ ಟಾಟಾ ಅವರ ಜೀವನಯಾನ, ಸೇವಾಭಾವ ಹಾಗೂ ಸಮಾಜಮುಖಿ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಚುಟುಕು ವೀಡಿಯೋ ಪ್ರದರ್ಶಿಸಲಾಯಿತು. ಇದರ ಮೂಲಕ ವಿದ್ಯಾರ್ಥಿಗಳು ಅವರ ವಿನಯಶೀಲತೆ, ದೇಶಾಭಿಮಾನ ಹಾಗೂ ಮಾನವ ಸೇವೆಯ ಮೌಲ್ಯಗಳನ್ನು ತಿಳಿಯುವ ಅವಕಾಶ ಪಡೆದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಶಶಿಕಲಾ ಕೆ. ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿದ್ದು, ಶಿಕ್ಷಕಿ ಪ್ರಿಯಾ ರವರು ಕಾರ್ಯಕ್ರಮವನ್ನು ನೆರವೇರಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಕರ್ತವ್ಯ ಜೈನ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.






















































