
ಕಾರ್ಕಳ ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸರಕಾರದ ಆದೇಶದಂತೆ ಪೂರ್ಣ ವಂದೇ ಮಾತರಂ ಗೀತೆಯ ಶಾಸ್ತ್ರ ಬದ್ಧ ಹಾಡಿಗೆ ತಯಾರಾಗುತ್ತಿದೆ.
ವಂದೇ ಮಾತರಂ ದೇಶದ ಪ್ರಜೆಗಳ ಭಾವನೆಗಳ ಪ್ರತೀಕವಾಗಿದ್ದು ಜನರಿಗೆ ಪ್ರೇರಣಾದಾಯಿಯಾಗಿ ಸ್ವಾತಂತ್ರ್ಯ ತರುವಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಇದರ ಸರಿಯಾದ ಉದ್ಘೋಷ ಮಕ್ಕಳಲ್ಲಿ ದೇಶ ಪ್ರೇಮದ ಕಿಡಿಯನ್ನು ಉದ್ದೀಪನ ಗೊಳಿಸಲಿದೆ. ಈ ಕಾರಣದಿಂದ ಅದರ ಶಾಸ್ತ್ರಬದ್ಧ ಉದ್ಘೋಷದ ಕಲಿಕೆ ಖ್ಯಾತ ಸಂಗೀತ ಗುರು, ಭಜನೆ ಹಾಗೂ ಭಾವ ಗೀತೆಗಳ ಮೇರು ಯೋಗೀಶ್ ಕಿಣಿ ಯವರ ಮಾರ್ಗದರ್ಶನದಲ್ಲಿ ಇಂದು ಪ್ರಾರಂಭಗೊಂಡಿತು.
ಎಲ್ಲಾ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಈ ಕಲಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.



