
ಕಾಂತಾರ-1 ಚಿತ್ರ ಇಂದು ಬಿಡುಗಡೆಗೊಳ್ಳಲಿದ್ದು, ಸಂದರ್ಶನವೊಂದರಲ್ಲಿ ಕಾಂತಾರದ ನಂತರ ವಾಟ್ ನೆಕ್ಸ್ಟ್ ಎಂಬ ಪ್ರಶ್ನೆಗೆ ಉತ್ತರಿಸಿದ ರಿಷಬ್ ಶೆಟ್ಟಿ ಮುಂದೆ ʼರೆಸ್ಟ್ʼ ಎಂದು ಉತ್ತರಿಸಿದ್ದಾರೆ.
ಈ ಚಿತ್ರದ ನಂತರ ಮುಂದೆ ವಿಶ್ರಾಂತಿ ಪಡೆಯುವುದು. ಚಿತ್ರಕ್ಕೆ ಬಹಳ ಶ್ರಮ ಹಾಕಿದ್ದೇವೆ. ನಮ್ಮ ತಂಡಕ್ಕೆ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಬಿಡುಗಡೆಯ ದಿನಾಂಕ ಪ್ರಕಟ ಮಾಡಿದ್ದರಿಂದ ಆ ದಿನದ ಒಳಗಡೆ ಮುಗಿಸಲೇಬೇಕಾದ ಒತ್ತಡವಿತ್ತು. ಹೀಗಾಗಿ ಮುಂದೆ ವಿಶ್ರಾಂತಿ ಪಡೆಯುವುದು ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.



















