
ಅನಾರೋಗ್ಯದಿಂದ ಆರ್ಥಿಕವಾಗಿ ಸಂಕಷ್ಟ ದಲ್ಲಿದ್ದ ಕಾರ್ಕಳ ತಾಲೂಕು ಕಾಳಿಕಾಂಬಾ ದೇವಸ್ಥಾನ ಬಳಿಯ ನಿವಾಸಿ ಗಣೇಶ್ ರಾವ್ ಕವಡೆಯವರಿಗೆ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ರವರ ಮುತುವರ್ಜಿಯಲ್ಲಿ ಕೆ ಕೆ ಎಮ್ ಪಿ ಕೇಂದ್ರ ಸಮಿತಿ ವತಿಯಿಂದ ಅಧ್ಯಕ್ಷರಾದ ಶ್ರೀ ಸುರೇಶ್ ರಾವ್ ಸಾಠೆಯವರು ನೀಡಿದ ಹತ್ತು ಸಾವಿರ ರೂಪಾಯಿ ಚೆಕ್ ನ್ನು ನೀಡಲಾಯಿತು. ಈ ಸಂದರ್ಭ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್,ಉಡುಪಿ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಕವಡೆ, ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ಕಾರ್ಕಳ ತಾಲೂಕು ಅಧ್ಯಕ್ಷ ಕೆ.ಬಿ.ಕೀರ್ತನ್ ಕುಮಾರ್ ಲಾಡ್, ಕಾರ್ಯದರ್ಶಿ ಹರೀಶ್ ರಾವ್ ಅಸ್ವಾಲ್, ಕೋಶಾಧಿಕಾರಿ ಸತೀಶ್ ರಾವ್ ಪವಾರ್ ,ಹಾಗೂ ಹಿರಿಯರಾದ ಹರಿಶ್ಚಂದ್ರ ರಾವ್ ಮೋರೆ,ದಿನೇಶ್ ರಾವ್ ಕವಡೆ ,ಸುಧೀರ್ ರಾವ್ ಕವಡೆ, ವಿಜೇತ್ ರಾವ್ ಉಪಸ್ಥಿತರಿದ್ದರು.








