“ಕವರ್ ಸ್ಟೋರಿ”ಕನ್ನಡ ಕಿರುಚಿತ್ರದ ಮುಹೂರ್ತ

ಕಡಲು ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ತುಕಾರಾಮ ಬಾಯಾರು ನಿರ್ದೇಶನದ “ಕವರ್ ಸ್ಟೋರಿ” ಕನ್ನಡ ಕಿರುಚಿತ್ರದ ಮುಹೂರ್ತ ಮಣಿಪಾಲದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.
ಪಡುಕುತ್ಯಾರು ಶ್ರೀ ಆನೆಗುಂದಿ ಮಹಾಸಂಸ್ಥಾನದ ಪ್ರಧಾನ ಪುರೋಹಿತರು ಆದಂತಹ ಅಕ್ಷಯ ಶರ್ಮಾ ತಂತ್ರಿ ಕಟಪಾಡಿ ಇವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದಂತಹ ತುಕಾರಾಮ ಬಾಯಾರು, ಸ್ವರ್ಣೋದ್ಯಮಿ ರವಿರಾಜ್ ಆಚಾರ್ಯ ಪರ್ಕಳ, ನಾಯಕ ಪ್ರಭು ಆಚಾರ್ಯ ಕುಕ್ಕಿಕಟ್ಟೆ, ನಾಯಕಿ ತೇಜಸ್ವಿನಿ ಬಂಗೇರ ಬ್ರಹ್ಮಾವರ, ನಿರ್ಮಾಪಕ ನಾಣಿ ಉಪ್ಪಿನಂಗಡಿ, ಶಶಿಕಾಂತ ವಿ ಆಚಾರ್ಯ ಎಡ್ಮೇರು, ಛಾಯಾಗ್ರಾಹಕ ಸತೀಶ್ ಆಚಾರ್ಯ ಉಡುಪಿ, ಭಾರತಿ ಟಿ.ಕೆ. ಕುದ್ರು, ಅರುಣ್ ಎಸ್ ಕುಂದರ್ ಬೆಳ್ಳೆ, ಶ್ರೀಲತಾ ಬ್ರಹ್ಮಾವರ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






