24.5 C
Udupi
Saturday, August 9, 2025
spot_img
spot_img
HomeBlogಉಡುಪಿ: "ಬೇಡಿಕೆಗಳು ಈಡೇರುವವರೆಗೂ ಹಿಂತಿರುಗುವುದಿಲ್ಲ"

ಉಡುಪಿ: “ಬೇಡಿಕೆಗಳು ಈಡೇರುವವರೆಗೂ ಹಿಂತಿರುಗುವುದಿಲ್ಲ”

ಆಳಸಮುದ್ರ ಮೀನುಗಾರಿಕೆ ಕಾರ್ಮಿಕರಿಂದ ವೇತನ ಹೆಚ್ಚಳದ ಕುರಿತು ಪ್ರತಿಭಟನೆ

ಉಡುಪಿ:ಉಡುಪಿ ಮತ್ತು ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು ತಮ್ಮ ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆಗಸ್ಟ್ 15ರ ನಂತರ ಪ್ರಾರಂಭವಾಗುವ ಮೀನುಗಾರಿಕೆಗೆ, ತಮ್ಮ ಬೇಡಿಕೆಗಳು ಈಡೇರುವವರೆಗೂ ಹಿಂತಿರುಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಪ್ರಸ್ತುತ, ಪ್ರತಿ ಟ್ರಿಪ್‌ನ ಆದಾಯದ 22% ಅನ್ನು ಮೀನುಗಾರರಿಗೆ ಹಂಚಲಾಗುತ್ತದೆ, ಇದರಲ್ಲಿ ತಾಂಡೇಲರಿಗೆ (ದೋಣಿ ಚಾಲಕರು) ಎರಡು ಪಾಲು ಸಿಗುತ್ತದೆ ಮತ್ತು ಮಾಲೀಕರು ಹೆಚ್ಚುವರಿ 1-2% ನೀಡುತ್ತಾರೆ. ಈ ವೇತನ ಹಂಚಿಕೆ ಅಸಮರ್ಪಕವಾಗಿದೆ ಅನ್ನೋದು ಕಾರ್ಮಿಕರ ಅಳಲು.

ಕಾರ್ಮಿಕರ ಮೂಲ ಮತ್ತು ಸವಾಲುಗಳು
ಮಲ್ಪೆ ಬಂದರಿನಲ್ಲಿರುವ ಆಳದೋಣಿಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಹೊನ್ನಾವರ, ಮಂಕಿ, ಉಡುಪಿ ಜಿಲ್ಲೆಯ ಬೈಂದೂರು ಮತ್ತು ಕುಂದಾಪುರ ತಾಲೂಕಿನ ಮೀನುಗಾರರು ಹೆಚ್ಚಾಗಿದ್ದಾರೆ. ಇತ್ತೀಚೆಗೆ ಹೊರ ರಾಜ್ಯದ ಕಾರ್ಮಿಕರೂ ಸೇರಿಕೊಂಡಿದ್ದಾರೆ. ಸ್ಥಳೀಯ ಕಾರ್ಮಿಕರ ಕೊರತೆ ಮತ್ತು ಹೊರ ರಾಜ್ಯದ ಕಾರ್ಮಿಕರ ಮೇಲೆ ಸಂಪೂರ್ಣ ಅವಲಂಬನೆ ಮಾಲೀಕರಿಗೆ ಮತ್ತು ತಾಂಡೇಲರಿಗೆ ಕಷ್ಟಕರವಾಗಿದೆ. ಇದು ವೇತನ ಹೆಚ್ಚಳದ ಬೇಡಿಕೆಗೆ ಒಂದು ಪ್ರಮುಖ ಕಾರಣವಾಗಿದೆ.

ಕಾರ್ಮಿಕರು ವೇತನ ಹೆಚ್ಚಳಕ್ಕಾಗಿ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಇಂದು ಮಲ್ಪೆಯಲ್ಲಿ ಆಳದೋಣಿ ಮಾಲೀಕರು ಮತ್ತು ತಾಂಡೇಲರ ಸಭೆ ನಿಗದಿಯಾಗಿದೆ. ಮೀನುಗಾರಿಕೆ ಸಚಿವರ ಸಮ್ಮುಖದಲ್ಲಿ ಮಾಲೀಕರು, ತಾಂಡೇಲರು ಮತ್ತು ಕಾರ್ಮಿಕರ ನಡುವೆ ಸಭೆ ನಡೆಯುವ ಸಾಧ್ಯತೆಯೂ ಇದೆ. ಪ್ರಸ್ತುತ, ಮೀನುಗಾರರಿಗೆ ಪ್ರತಿ ಟ್ರಿಪ್ ಆದಾಯದ 22% ಹಂಚಿಕೆಯಾಗುತ್ತಿದ್ದು, ತಾಂಡೇಲರಿಗೆ ಎರಡು ಪಾಲು ಮತ್ತು ಮಾಲೀಕರಿಂದ ಹೆಚ್ಚುವರಿ 1-2% ಸಿಗುತ್ತದೆ. ಕಾರ್ಮಿಕರು ಈ ವೇತನ ಹಂಚಿಕೆಯನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page