
ಕಾರ್ಕಳ ತಾಲೂಕಿನ ಇರ್ವತ್ತೂರು ಬಸದಿಯಿಂದ ಪಂಚಾಯತ್ ಸಂಪರ್ಕ ಕೇದಗೆ ರಸ್ತೆ ತೀವ್ರ ಹದಗೆಟ್ಟಿದ್ದು ಜನರು ಮತ್ತು ವಾಹನ ಸಂಚಾರಕ್ಕೆ ತುಂಬಾ ಕಷ್ಟಕರವಾಗಿದ್ದು ಜೂನ್ 16 ರ ರಾತ್ರಿ ವೇಳೆ ಘನ ವಾಹನವೊಂದು ಈ ರಸ್ತೆಯಲ್ಲಿ ಸಿಲುಕಿಕೊಂಡಿದ್ದು ಇದನ್ನು ಸಾರ್ವಜನಿಕರು ಜೆಸಿಬಿ ಯ ಮುಖಾಂತರ ತೆರವುಗೊಳಿಸಿದ್ದರು…ಈ ಕುರಿತು ನಮ್ಮ ಕಾರ್ಲ ನ್ಯೂಸ್ ಚಾನೆಲ್ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭರತ್ ಕುಮಾರ್ ಜೈನ್ ಸಹಕಾರದಲ್ಲಿ ಹದಗೆಟ್ಟ ರಸ್ತೆಯ ಕಾಮಗಾರಿಯನ್ನು ಜೂನ್ 20 ರಂದು ಆರಂಬಿಸಿದ್ದರು.