ಕೇಕ್ ಕತ್ತರಿಸಿ ,ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

ಕೊಪ್ಪಳ: ಕನಕಗರಿ ಮೂಲದ ಆರ್ಯನ್ (22) 15 ದಿನಗಳ ಹಿಂದೆ ಬೈಕ್ ಅಪಘಾತದಲ್ಲಿ, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಹುಟ್ಟಿದ ಹಬ್ಬದ ದಿನವೇ ಮೃತಪಟ್ಟಿದ್ದಾನೆ.
ಹುಟ್ಟಿದ ಹಬ್ಬದ ದಿನವೇ ಮೃತಪಟ್ಟ ಮಗನ ಕೈಹಿಡಿದು ಪೋಷಕರು ಕೇಕ್ ಕತ್ತರಿಸಿದ್ದು ಮಗನ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.



















































