25.7 C
Udupi
Wednesday, July 30, 2025
spot_img
spot_img
HomeBlogಅಧಿಕ ಮಳೆಯ ಹಿನ್ನೆಲೆ ಅಮರನಾಥ ಯಾತ್ರೆ ತಾತ್ಕಾಲಿಕ ರದ್ದು

ಅಧಿಕ ಮಳೆಯ ಹಿನ್ನೆಲೆ ಅಮರನಾಥ ಯಾತ್ರೆ ತಾತ್ಕಾಲಿಕ ರದ್ದು

ಶ್ರೀನಗರ: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ್ ಯಾತ್ರೆಯು ತಾತ್ಕಾಲಿಕವಾಗಿ ರದ್ದಾಗಿದೆ.

ಜುಲೈ 16ರಂದು ಗಂಡೆರ್ಬಲ್ ಜಿಲ್ಲೆಯ ಬಾಲ್ಜಾಲ್‌ನ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ ಹಲವು ಹಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹವಮಾನ ಇಲಾಖೆಯ ಮುನ್ಸೂಚನೆ ಮೇರೆಗೆ ಅಮರನಾಥ ಯಾತ್ರೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.

ಅಮರನಾಥ ಯಾತ್ರೆಗಳ ಸುರಕ್ಷತೆಗಾಗಿ ಆಡಳಿತ ವಿಶೇಷ ಗಮನಹರಿಸುತ್ತದೆ. ಸ್ಥಳೀಯ ಆಡಳಿತ ಮತ್ತು ಭದ್ರತಾ ಪಡೆಗಳು ತೀರ್ಥಯಾತ್ರೆಯನ್ನು ಸುಗಮವಾಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಗುರುವಾರ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆಯ ಮುನ್ಸೂಚನೆ ಮೇರೆಗೆ ಈ ವೇಳೆ ಭೂಕಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಗುರುವಾರ ಅಮರನಾಥಯಾತ್ರೆಗೆ ಜಮ್ಮು ಯಾತ್ರೆ ನಿವಾಸದಿಂದ ಯಾವುದೇ ಗುಂಪು ಹೊರಡುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page