
ಕಾರ್ಕಳ ತಾಲೂಕಿನ ಸಾಲ್ಮರ ನಿವಾಸಿಯಾಗಿರುವ ವೆಂಕಟೇಶ್ ಆರ್ ಮತ್ತು ಕಾಂತಮ್ಮ ಎಂ ಇವರ ಮಗನಾದ ಗುಣವೀರ.ವಿ. ಹೈದರಾಬಾದ್ ನಲ್ಲಿ ನಡೆದ First Asian Open International ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ”ಬೆಳ್ಳಿಯ ಪದಕ”ವನ್ನು ಪಡೆದಿದ್ದಾನೆ.
ಪಸ್ತುತ ಕಾರ್ಕಳದ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ 10 ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.ಇವರು 2022ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ “ಚಿನ್ನದ ಪದಕ”ವನ್ನು ಪಡೆದಿರುತ್ತಾನೆ.ಹಾಗೆಯೇ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ “ಚಿನ್ನದ ಪದಕ”ವನ್ನು ಪಡೆದಿರುತ್ತಾನೆ

1st /TAGI’S CUP ದಕ್ಷಿಣ ಕನ್ನಡ ಟೇಕ್ವಾಂಡೋ ಸಂಸ್ಥೆ interdistrict ನಲ್ಲಿ “ಬೆಳ್ಳಿಯ ಪದಕ”ವನ್ನು ಗಳಿಸಿರುತ್ತಾನೆ. ಹಾಗೆ poornse ಯಲ್ಲಿ “ಕಂಚಿನಪದಕ”ವನ್ನು ಪಡೆದಿರುತ್ತಾನೆ.2nd state open taekwondo kyorugi ರಾಜ್ಯಮಟ್ಟದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾನೆ.2nd/TAGI’S TULUNAD taekwondo ಚಾಂಪಿಯನ್ ಶಿಪ್ ನಲ್ಲಿ 2022 ರಲ್ಲಿ “ಚಿನ್ನದ ಪದಕ”ವನ್ನು ಪಡೆದಿರುತ್ತಾನೆ. ಹಾಗೂ ಜಿಲ್ಲಾ ಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿಯು ಸಹ ಗುಣವೀರ. ವಿ.”ಚಿನ್ನದ ಪದಕ”ವನ್ನು ಪಡೆದಿರುತ್ತಾನೆ.ಇವರು ಕಾರ್ಕಳದ ಸುರೇಶ್ ದೇವಾಡಿಗರವರ ಬಳಿ 8 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾನೆ











