
ಲಕ್ನೋ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶೀಘ್ರದಲ್ಲೇ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಪಡೆಯಲಿದ್ದಾರೆ ಎಂದು ಬಾರಾಬಂಕಿ ಕ್ಷೇತ್ರದ ಕಾಂಗ್ರೆಸ್ ಸಂಸದ ತನುಜ್ ಪುನಿಯಾ ತಿಳಿಸಿದ್ದಾರೆ.
ಇದೀಗ ಧ್ವಜಾರೋಹಣ, ಶಿಖರ ಸ್ಥಾಪನೆ ಮತ್ತು ನಿಯಮಿತ ಪೂಜೆ ಆರಂಭವಾಗಿರುವುದರಿಂದ ರಾಮ ಮಂದಿರವನ್ನು ಪೂರ್ಣಗೊಂಡದ್ದಾಗಿ ಪರಿಗಣಿಸಬಹುದಾಗಿದ್ದು ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ತಮ್ಮ ಅನುಕೂಲ ಮತ್ತು ಸಮಯಕ್ಕೆ ತಕ್ಕಂತೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಗೆ ಭಗವಾನ್ ಶ್ರೀರಾಮನಲ್ಲಿ ನಂಬಿಕೆ ಇದೆ ಮತ್ತು ಎಲ್ಲ ಧರ್ಮ–ಸಂಪ್ರದಾಯಗಳನ್ನು ಅವರು ಗೌರವಿಸುತ್ತಾರೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ಭಾಷಣಗಳನ್ನು ಕೇಳುವುದರಿಂದ ಅವರು ಭಗವಾನ್ ಮಹಾದೇವ ಮತ್ತು ಭಗವಾನ್ ರಾಮನ ಬಗ್ಗೆಯೂ ಉಲ್ಲೇಖಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ರಾಹುಲ್ ಗಾಂಧಿ ಹಿಂದೂ ಧರ್ಮವನ್ನು ನಂಬುತ್ತಾರೆ ಮತ್ತು ಅದರ ಸಂಪ್ರದಾಯಗಳನ್ನು ಗೌರವಿಸುತ್ತಾರೆ ಎಂದು ಕಾಂಗ್ರೆಸ್ ಸಂಸದ ಸ್ಪಷ್ಟಪಡಿಸಿದ್ದಾರೆ.



















