27 C
Udupi
Saturday, March 14, 2026
spot_img
spot_img
HomeBlogರಾಷ್ಟ್ರಗೀತೆಯ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿದ ಹೇಳಿಕೆ, ರಾಷ್ಟ್ರಕ್ಕೆ ಮಾಡಿದ ಮಹಾಪಮಾನ

ರಾಷ್ಟ್ರಗೀತೆಯ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿದ ಹೇಳಿಕೆ, ರಾಷ್ಟ್ರಕ್ಕೆ ಮಾಡಿದ ಮಹಾಪಮಾನ

ಕೂಡಲೇ ಲೋಕಸಭಾ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ: ಬಿಪಿನಚಂದ್ರ ಪಾಲ್,ನಕ್ರೆ

ದೇಶ ಸಂವಿಧಾನದಡಿಯಲ್ಲಿ ರಾಷ್ಟ್ರಗೀತೆಯನ್ನಾಗಿ ಒಪ್ಪಿಕೊಂಡ ಕವಿ ರವೀಂದ್ರನಾತ ಠಾಗೂರರ ಜನ ಗಣ ಮನ ಬ್ರಿಟಿಷ್ ಅಧಿಕಾರಿಯನ್ನ ಸ್ವಾಗತಿಸಲು ಬರೆದ ಕವಿತೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿದ ಹೇಳಿಕೆ ರಾಷ್ಟ್ರಕ್ಕೆ ಮಾಡಿದ ಮಹಾಪಮಾ‌ನ. ಇದರ ಹಿಂದೆ ಬಿಜೆಪಿಯ ಮನುವಾದಿ ಹಿನ್ನೆಲೆಯ ಗುಪ್ತ ಕಾರ್ಯ ಸೂಚಿ ಅಡಗಿದೆ. ಸಂವಿಧಾನದ ಗೌರವ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೂಡಲೇ ಅವರನ್ನು ಲೋಕಸಭಾ ಸದಸ್ಯತ್ವ ಸ್ಥಾ‌ನದಿಂದ ವಜಾಗೊಳಿಸ ಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.


ದೇಶದ ಪ್ರಜೆಯನ್ನು ಭಾರತದ ಭಾಗ್ಯವಿಧಾತನನ್ನಾಗಿ ಕಾಣುವ, ದೇಶದ ಭೌಗೋಲಿಕ ಸಾಮಾಜಿಕ ಸಾಂಸ್ಕೃತಿಕ ಐಖ್ಯತೆ ಸಮಗ್ರತೆ ಯನ್ನು ಜಾಗೃತಗೊಳಿಸುವ ರಾಷ್ಟ್ರಗೀತೆಯಾಗಿ ಜನಮಾಸದಲ್ಲಿ ಮೆರೆದ ಜನಗಣಮನ ಹಾಡಿನ ಅರ್ಥ ಮಹತ್ವ ಕಾಗೇರಿಯಂತಹ ಒಬ್ಬ ಮಾಜಿ ಸ್ಪೀಕರ್ ಹಾಲೀ ಸಂಸದನಿಗೆ ತಿಳಿಯದೇ ಹೋಗಿರು ವುದರ ಹಿಂದೆ ಅವರ ರಾಜಕೀಯ ಸಂಸ್ಕೃತಿಯ ಪ್ರಭಾವ ಅಡಗಿದೆ. ದೇಶದ ಆಡಳಿತದ ಹೊಣೆ ಹೊತ್ತವರ ಮನುವಾದಿ ಚಿಂತನೆ ಇದೀಗ ರಾಷ್ಟಗೀತೆಯನ್ನು ಬದಲಿಸಲು ಹೊರಟಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಧರ್ಮ ನಿರಪೇಕ್ಷತೆ, ಜಾತ್ಯತೀತತೆ ವಿವಿಧತೆಯಲ್ಲಿ ಏಕತೆಯ ಸಮ ಸಮಾಜ ನಿರ್ಮಾಣವೇ ಮೊದಲಾದ ಸಾಂವಿಧಾನಿಕ ಮೌಲ್ಯಗಳನ್ನು ಬದಿಗೊತ್ತಿ ಕೇಸರಿಯನ್ನು ರಾಷ್ಟ್ರ ಧ್ವಜವಾಗಿಸಿ ಮನುಸ್ಮ್ರತಿಯನ್ನು ಸಂವಿಧಾನ ವನ್ನಾಗಿಸಿ, ವಂದೇ ಮಾತರಂ ನ್ನು ರಾಷ್ಟ್ರಗಳಿಂದ ಗೀತೆಯಾಗಿಸುವದನ್ನೆ ತಮ್ಮ ಆಡಳಿತದ ಗುರಿಯಾಗಿಸಿ ಕೊಂಡ ಬಿಜೆಪಿಗೆ ದೇಶ ಒಪ್ಪಿಕೊಂಡ ಅಂಬೇಡ್ಕರ್ ಸಂವಿಧಾನ, ಪಿಂಗಲಿ ವೆಂಕಯ್ಯರ ರಾಷ್ಟ್ರಧ್ವಜ, ಠಾಗೂರರ ರಾಷ್ಟ್ರಗೀತೆ ಅಡ್ಡ ನಿಂತಿದೆ. ದೇಶದ ಪ್ರಜಾಒ್ರಭುತ್ವ ಈ ಬದಲಾವಣೆಯನ್ನು ಒಪ್ಪಲು ಸಾಧ್ಯವಿಲ್ಲ. ಇದು ಮುಂದಿನ ದಿನಗಳಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಪ್ರಜಾ ಕ್ರಾಂತಿಗೆ ಕಾರಣವಾದೀತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page