
ಹೊಸದಿಲ್ಲಿ: ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಪ್ರತಿ ಶಾಖೆಗಳಲ್ಲಿ ಸಿಬ್ಬಂದಿಯು ಗ್ರಾಹಕರೊಂದಿಗೆ ಸ್ಥಳೀಯ ಭಾಷೆಗಳಲ್ಲಿ ಮಾತನಾಡುವಂತೆ ನೋಡಿಕೊಳ್ಳುವಂತೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ ಸೂಚನೆ ನೀಡಿದ್ದಾರೆ.
ನಮ್ಮ ಮಾನವ ಸಂಪನ್ಮೂಲ ನೀತಿಯನ್ನು ಸಮರ್ಥಿಸಲು ನನಗೆ ಕಷ್ಟವಾಗುತ್ತದೆ. ಸ್ಥಳೀಯ ಭಾಷೆಯ ಗಂಧವೇ ಇಲ್ಲದ ಜನರನ್ನು ನಾವು ವಿವಿಧ ಸ್ಥಳಗಳಿಗೆ ನೇಮಿಸುತ್ತೇವೆ ಎಂದು ಹೇಳಿದ ಅವರು ವ್ಯಕ್ತಿಗತ ಸಂಬಂಧವು ಭಾರತೀಯ ಬ್ಯಾಂಕಿಂಗ್ ನ ಪ್ರಧಾನ ಲಕ್ಷಣವಾಗಿದೆ. ಶಾಖೆಯೊಂದಕ್ಕೆ ನೇಮಿಸಲಾದ ಪ್ರತಿಯೊಬ್ಬ ಸಿಬ್ಬಂದಿ ಸ್ಥಳೀಯ ಭಾಷೆ ಮಾತನಾಡಬೇಕು. ಸ್ಥಳೀಯ ಭಾಷಾ ಪ್ರಾವಿಣ್ಯತೆಯು ನಿರ್ವಹಣಾ ಮಾನದಂಡವಾಗಬೇಕು ಎಂದು ಹೇಳಿದರು.







