20.5 C
Udupi
Thursday, December 25, 2025
spot_img
spot_img
HomeBlog•ಬೆಂಗಳೂರಿನ ಶಿಶಿರೋತ್ಸವದಲ್ಲಿ 17 ಪದಕಗಳನ್ನು ಮುಡಿಗೇರಿಸಿ ಬೀಗಿದ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಕಾರ್ಕಳದ ವಿದ್ಯಾರ್ಥಿಗಳು•

•ಬೆಂಗಳೂರಿನ ಶಿಶಿರೋತ್ಸವದಲ್ಲಿ 17 ಪದಕಗಳನ್ನು ಮುಡಿಗೇರಿಸಿ ಬೀಗಿದ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಕಾರ್ಕಳದ ವಿದ್ಯಾರ್ಥಿಗಳು•


ಕಾರ್ಕಳ : ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಪ್ರತಿ ವರ್ಷ ನಡೆಸಲಾಗುವ ವಿಶೇಷ ಶಿಶಿರೋತ್ಸವ ಕ್ರೀಡಾಕೂಟವು 20/12/2025 ರಿಂದ 23/12/2025 ರವರೆಗೆ ನಡೆದಿತ್ತು.

ಈ ರಾಷ್ಟ್ರೀಯ ಕ್ರೀಡೋತ್ಸವದಲ್ಲಿ ಕಾರ್ಕಳ ರವಿಶಂಕರ ವಿದ್ಯಾಮಂದಿರದ ಮಕ್ಕಳು ಸಕ್ರೀಯವಾಗಿ ಭಾಗವಹಿಸಿ ವಿವಿಧ ವಿಭಾಗದಲ್ಲಿ ಸುಮಾರು 17 ಪದಕಗಳನ್ನು ಗಳಿಸಿ ಜಯಶೀಲರಾಗಿರುತ್ತಾರೆ. ಮುಖ್ಯವಾಗಿ14 ವರುಷದ ಒಳಗಿನ ಬಾಲಕಿಯರ ವಿಭಾಗದ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ ಗ್ರಂಥ ಎಸ್. ದೇವಾಡಿಗ ತೃತೀಯ ಸ್ಥಾನವನ್ನು ಪಡೆದಿದ್ದು, 17 ವರುಷದ ಒಳಗಿನ ಬಾಲಕಿಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ 9 ನೇ ತರಗತಿ ವಿದ್ಯಾರ್ಥಿನಿ ಸುಜನ್ಯ ಕುಲಾಲ್ ದ್ವಿತೀಯ ಸ್ಥಾನವನ್ನು ಹಾಗೂ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. 17 ವರ್ಷದ ಒಳಗಿನ ಬಾಲಕಿಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಪ್ರಗ್ಯ ಪುತ್ರನ್ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. 17 ವರ್ಷದ ಒಳಗಿನ ಚೆಸ್ ಸ್ಪರ್ಧೆಯಲ್ಲಿ ಬಾಲಕರ ತಂಡವು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. 17 ವರುಷದ ಒಳಗಿನ ಬಾಲಕಿಯರ ವಾಲಿಬಾಲ್ ಸ್ಪರ್ಧೆಯಲ್ಲಿ ಕಾರ್ಕಳ ವಿದ್ಯಾಮಂದಿರದ ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ಪಡೆದು ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.

ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಡಾ. ಪ್ರಶಾಂತ್ ಹೆಗ್ಡೆ, ಕೋಶಾಧಿಕಾರಿಯವರಾದ ಶ್ರೀಯುತ ದಿನೇಶ್ ಕಾಮತ್, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್ ಕಾಮತ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿ ಇವರ ಮುಂದಿನ ಕ್ರೀಡಾಭವಿಷ್ಯವು ಉಜ್ವಲ ವಾಗಿರಲಿ ಎಂದು ಹಾರೈಸಿರುತ್ತಾರೆ.. ಇವರ ಈ ಸಾಧನೆಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿಯರಾದ ಶ್ರೀಮತಿ ವಿದ್ಯಾ ಯು.ಶೆಟ್ಟಿ ಹಾಗೂ ಹರಿಣಿ ಇವರು ಮಕ್ಕಳಿಗೆ ಕ್ರೀಡಾ ತರಬೇತಿಯನ್ನು ನೀಡಿರುತ್ತಾರೆ. ಅವರಿಗೆ ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದ ಶ್ಲಾಘನೆಯನ್ನು ವ್ಯಕ್ತಪಡಿಸಿರುತ್ತಾರೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page