
ಕಾರ್ಕಳ: ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿಪಂ ಮಾಜಿ ಸದಸ್ಯ ಉದಯ್ ಎಸ್. ಕೋಟ್ಯಾನ್ ಹಾಗೂ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್ ಇವರಿಬ್ಬರನ್ನು ಬಿಜೆಪಿ ಪಕ್ಷದಿಂದ 6 ವರುಷಗಳ ಕಾಲ ಉಚ್ಚಾಟಿಸಲಾಗಿದೆ.ಪಕ್ಷದ ನಿರ್ಧಾರದ ವಿರುದ್ಧವಾಗಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಸ್ಪರ್ಧಿಸುತಿದ್ದು, (ಕೆ.ಎಂ.ಎಫ್.) ಇದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ ಎಂದು ತೀರ್ಮಾನಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾ ಬಿಜೆಪಿ ಕಿಶೋರ್ ಕುಮಾರ್ ಕುಂದಾಪುರ ಆದೇಶಿಸಿದ್ದಾರೆ.



