ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್ ಹೇಳಿಕೆ

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅಪರೇಷನ್ ಸಿಂದೂರ ಕುರಿತು ಮಾತನಾಡುವ ಸಂದರ್ಭದಲ್ಲಿ ಖ್ಯಾತ ಗೀತ ರಚನೆಕಾರ ಮತ್ತು ಚಿತ್ರಕತೆಗಾರ ಜಾವೇದ್ ಅಖ್ತರ್, ನಾನು ಮುಂಬೈಗೆ ಬಂದಾಗ ನನಗೆ 19 ವರ್ಷ ವಯಸ್ಸಾಗಿತ್ತು. ಈ ನೆಲದಲ್ಲಿ ನಾನು ಏನು ಆಗಬೇಕು ಅಂದುಕೊಂಡಿದ್ದೇನೆ ಅದು ಆಗಿದ್ದೇನೆ. ಪಾಕಿಸ್ತಾನ ಮತ್ತು ನರಕ ಇವೆರಡರಲ್ಲಿ ಯಾವುದು ಬೇಕೆಂದು ಕೇಳಿದರೆ ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಒಬ್ಬರ ಪರವಾಗಿ ಮಾತ್ರ ಮಾತನಾಡಿದರೆ ಮತ್ತೊಬ್ಬರು ಅಸಂತೋಷಗೊಳ್ಳುತ್ತೀರಿ. ಎಲ್ಲರ ಪರವಾಗಿ ಮಾತನಾಡಿದರೆ ಹೆಚ್ಚಿನ ಜನರು ಅಸಂತೋಷಗೊಳ್ಳುತ್ತೀರಿ. ನನ್ನ ಎಕ್ಸ್ ಖಾತೆ ಮತ್ತು ವಾಟ್ಸಪ್ ನಲ್ಲಿ ನನಗೆ ಎರಡು ಕಡೆಯಿಂದಲೂ ನಿಂದೆನೆಗಳು ಬರುತ್ತವೆ ಎಂದು ತಿಳಿಸಿದರು.








