
ಪ್ರಸ್ತುತ ನೀರಿನಲ್ಲಿ ಅರಿಶಿನ ಹಾಕಿ ರೀಲ್ಸ್ ಮಾಡುವ ಟ್ರೆಂಡ್ ದೇಶಾದ್ಯಂತ ಭಾರಿ ವೈರಲ್ ಆಗುತ್ತಿದೆ. ಆದರೆ ಈ ಅರಿಶಿಣ ನೀರಿನ ಟ್ರೆಂಡ್ ಮಾತ್ರ ಭಾರಿ ಅಪಾಯವನ್ನು ತಂದೊಡ್ಡುತ್ತದೆ ಎಂದಿದ್ದಾರೆ ಖ್ಯಾತ ಜ್ಯೋತಿಷಿ ಅರುಣ್ ಕುಮಾರ್ ವ್ಯಾಸ್ ಎಚ್ಚರಿಕೆ ನೀಡಿದ್ದಾರೆ.
ಇದು ಸಾಮಾನ್ಯ ಪ್ರಕ್ರಿಯೆ ಅಲ್ಲ. ತಾಂತ್ರಿಕ ಆಚರಣೆಯಾಗಿದೆ. ಇದು ತುಂಬಾ ಅಪಾಯಕಾರಿ. ನೀರಿನಲ್ಲಿ ಅರಿಶಿಣ ಹಾಕುವ ಕ್ರಮವನ್ನು ಬ್ಲ್ಯಾಕ್ ಮ್ಯಾಜಿಕ್ ಸಂದರ್ಭದಲ್ಲಿ ಬಳಸಲಾಗುತ್ತದೆ. ಅರಿಯದೇ ಈ ರೀತಿ ರೀಲ್ಸ್ ಮಾಡಿದರೆ, ಅಂಥವರು ತಮಗೆ ತಾವೇ ತೊಂದರೆಯನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಇದನ್ನು ಅಪ್ಪಿತಪ್ಪಿಯೂ ಪ್ರಯತ್ನಿಸಬೇಡಿ. ಇದರಿಂದ ನಿಮ್ಮ ಮನೆಯಲ್ಲಿ ಎಂದು ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸಲು ಅವಕಾಶ ನೀಡುವುದಲ್ಲದೆ, ಈ ಕ್ರಿಯೆಯು ದೆವ್ವಗಳನ್ನು ಆಹ್ವಾನಿಸಿದಂತೆ ಎಚ್ಚರಿಸಿದ್ದಾರೆ. ದೆವ್ವ, ಭೂತ, ಪ್ರೇತಗಳನ್ನು ನಂಬಿ-ಬಿಡಿ. ಆದರೆ ನಕಾರಾತ್ಮಕ ಶಕ್ತಿಯೊಂದು ಇದೆ ಎನ್ನುವುದಂತೂ ಸುಳ್ಳಲ್ಲವಲ್ಲ. ಇಂಥ ಕ್ರಿಯೆಯಿಂದ ನಿಮ್ಮ ಜೀವನವನ್ನು ನೀವೇ ನಕಾರಾತ್ಮಕತೆಗೆ ತಳ್ಳಿಕೊಂಡಂತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅದಲ್ಲದೆ ಈ ರೀತಿ ಮಾಡಿದರೆ ಅದು ನಿಮ್ಮ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಚಟುವಟಿಕೆಗಳು ಜನ್ಮ ಕುಂಡಲಿಯಲ್ಲಿ ಚಂದ್ರ ಮತ್ತು ಗುರು ಗ್ರಹಗಳನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ಅದೃಷ್ಟದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅಲ್ಲದೇ ಇದು ನಿಮ್ಮ ಮಾನಸಿಕ ಸ್ಥಿತಿಯನ್ನು ಹಾಳು ಮಾಡಬಹುದು ಎಂದಿರುವ ಅವರು, ಇದು ಸಂಪೂರ್ಣವಾಗಿ ಹಾನಿಕಾರಕ ಪ್ರಕ್ರಿಯೆಯಾಗಿದೆ. ನಿಮ್ಮ ಮನೆ, ಮನಸ್ಸು, ಭವಿಷ್ಯ ಎಲ್ಲದಕ್ಕೂ ವಿಪತ್ತು ತರಬಹುದು ಎಂದು ಹೇಳಿದ್ದಾರೆ.






















































