
ಕಾರ್ಕಳ :ತೆಳ್ಳಾರ್ ನಿವಾಸಿ ಕಾರ್ಕಳ ರೋಟರಿ ಕ್ಲಬ್ನ ಸಕ್ರಿಯ ಸದಸ್ಯ ಕಡಲತಡಿಯ ಭಾರ್ಗವ ಕೋಟ ಶಿವರಾಮ ಕಾರಂತ ಅವರ ಅಣ್ಣನ ಮಗ ಭಾಸ್ಕರ್ ಕಾರಂತ್ (89) ನ್ಯೂಮೋನಿಯಾದಿಂದ ಬಳಲುತ್ತಿದ್ದ ಇವರು ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೇ 21ರಂದು ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು. ಮೃತರು ಪತ್ನಿ ಕಸ್ತೂರಿ ಕಾರಂತ್ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.