
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿಯ ನಾಲ್ಕು ವಿದ್ಯಾರ್ಥಿಗಳು ಎಚ್ ಸಿ ಎಲ್ ಪೌಂಡೇಶನ್ ಸಂಸ್ಥೆಯು ನಡೆಸಿದ ದಕ್ಷಿಣ ಭಾರತ ವಿಭಾಗದಲ್ಲಿ ಜಯಗಳಿಸಿ ಚೆನ್ನೈಯಲ್ಲಿನಡೆಸಿದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಶಟ್ಲ್ ಬ್ಯಾಡ್ಮಿಂಟನ್ನಲ್ಲಿ ಜೋಡುರಸ್ತೆ ನಿವಾಸಿ ಸುಧೀರ್ ರಾವ್ ಮತ್ತು ಜ್ಯೋತಿ ದಂಪತಿಯ ಪುತ್ರ 8ನೇ ತರಗತಿಯ ಧನುಷ್ ದ್ವಿತೀಯ ಸ್ಥಾನವನ್ನೂ, ಟೇಬಲ್ ಟೆನ್ನಿಸ್ ನಲ್ಲಿ ಕಾಳಿಕಾಂಬ ನಿವಾಸಿ ಸುಧೀರ್ ರಾವ್ ಮತ್ತು ಜ್ಯೋತಿ ಇವರ ಪುತ್ರ 9 ನೇ ತರಗತಿಯಅಮೋಘ್ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.ದಕ್ಷಿಣ ಭಾರತ ತಂಡದ ತಂಡ ವ್ಯವಸ್ಥಾಪಕರಾಗಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವೇದಾವತಿ ಭಾಗವಹಿಸಿದ್ದರು











