29.7 C
Udupi
Sunday, December 28, 2025
spot_img
spot_img
HomeBlogಕಾರ್ಕಳ:ಎಂ ಪಿ ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ "ಅಬಿವಿನ್ಯಾಸ ಕಾರ್ಯಕ್ರಮ"

ಕಾರ್ಕಳ:ಎಂ ಪಿ ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ “ಅಬಿವಿನ್ಯಾಸ ಕಾರ್ಯಕ್ರಮ”

ಹೊಸದಾಗಿ ಪ್ರಥಮ ಬಿಕಾಂ ಪದವಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಅಬಿವಿನ್ಯಾಸ ಕಾರ್ಯಕ್ರಮವನ್ನು ಕಾರ್ಕಳದ ಎಂ ಪಿ ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಉದ್ಘಾಟಕರಾಗಿ ಕಾಲೇಜಿನ ಅಭಿವೃಧ್ದಿ ಸಮಿತಿಯ ಸದಸ್ಯರು ಹಾಗೂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಶ್ರೀ ವರ್ಮ ಅಜ್ರಿ ಎಂ ಇವರು ಆಗಮಿಸಿ ಕಾಲೇಜು ಬೆಳೆದು ಬಂದ ಇತಿಹಾಸ ಹಾಗೂ ಗುಣಮಟ್ಟ ಸಾಧನೆಯ ಬಗ್ಗೆ ಉಲ್ಲೇಖಿಸಿದರು. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಕಾಶ್‌ ರಾವ್‌ರವರು ಅಭ್ಯಾಗತರಾಗಿ ಆಗಮಿಸಿ ಕಾಲೇಜಿನ ಸೌಕರ್ಯಗಳ ಉತ್ತಮ ಬಳಕೆಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್‌ ರೈ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತುತ ಎಲ್ಲಾ ಸರಕಾರಿ ಪದವಿ ಕಾಲೇಜುಗಳು ಉತ್ಕ್ರಷ್ಥ ಶಿಕ್ಷಣ ಸೌಲಭ್ಯ ನೀಡುತ್ತಿವೆ ಎಂದು ಹೇಳಿದರು. ಅಲ್ಲದೆ ವಿದ್ಯಾರ್ಥಿಗಳು ಶಿಸ್ತು ,ಸಮಯ ಪ್ರಜ್ಞೆ ಮತ್ತು ಬದ್ದತೆಯಿಂದ ಅಧ್ಯಯನ ಮಾಡುವಂತೆ ಹಿತವಚನ ನೀಡಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಆಂತರೀಕ ಗುಣಮಟ್ಟ ಖಾತರಿ ಕೋಶದ ಸಂಚಾಲಕರಾದ ಶ್ರೀಮತಿ
ಸುಷ್ಮಾರಾವ್‌ ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕರು ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ವಿಬಾಗದ
ಮುಖ್ಯಸ್ಥೆ ಪ್ರೋಫೆಸರ್‌ ಡಾ.ಚಂದ್ರಾವತಿರವರು ಪ್ರಾಸ್ಥಾವಿಕ ಮಾತುಗಳನ್ನಾಡಿದರು., ವಾಣಿಜ್ಯಶಾಸ್ತ್ರ
ವಿಭಾಗದ ಸಹ ಪ್ರಾಧ್ಯಾಪಕರಾದ ಡಾ ಸುದರ್ಶನ್‌ ಪಿ ವಂದನಾರ್ಪಣೆಗೈದರು .ವಾಣಿಜ್ಯಶಾಸ್ತ್ರ
ಉಪನ್ಯಾಸಕಿ ಶ್ರೀಮತಿ ಅಕ್ಷತಾ ರಾವ್‌ ಕಾರ್ಯಕ್ರಮ ನಿರ್ವಹಿಸಿದರು.ಕು. ದಿವ್ಯಶ್ರೀ ತೃತಿಯ ಬಿ ಕಾಂ
ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ನಿಯಮಾವಳಿಗಳು,ವಿವಿಧ ಸಂಘಗಳು ,ಶೈಕ್ಷಣೀಕ ನಿಯಮ ಗಳು ಮತ್ತು ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಲಾಯಿತು. ಪ್ರಥಮ ಬಿಕಾಂ ಪದವಿಯ 156 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page