ಸದುಪಯೋಗ ಪಡೆದುಕೊಳ್ಳುವಂತೆ ಯುವ ಸಮುದಾಯಕ್ಕೆ ಉದಯ ಶೆಟ್ಟಿ ಮುನಿಯಾಲು ಮನವಿ

ಶಿಕ್ಷಣದ ಬಳಿಕ ಉದ್ಯೋಗವನ್ನು ಪಡೆಯುವುದು ಇಂದಿನ ಯುವ ಜನತೆಯ ಮುಂದಿರುವ ದೊಡ್ಡ ಸವಾಲು, ಯುವ ಜನತೆಯ ಉದ್ಯೋಗದ ಸಮಸ್ಯೆಯನ್ನು ಮನಗಂಡು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯಕುಮಾರ್ ಸೊರಕೆ ಅವರ ಮುಂದಾಳತ್ವದಲ್ಲಿ ಎಲ್ಲಾ ಕಾಂಗ್ರೆಸ್ ಪ್ರಮುಖರ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಪ್ರಚಾರ ಸಮಿತಿಯ ಆಶ್ರಯದಲ್ಲಿ ಕಾಪು ತಾಲೂಕಿನ ದಂಡತೀರ್ಥ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಳೆ ದಿನಾಂಕ 11.10.2025 ರಂದು ಬೆಳಿಗ್ಗೆ 10.00 ರಿಂದ ಸಂಜೆ 4.00 ಗಂಟೆಯ ತನಕ ಬೃಹತ್ ಉಚಿತ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಯುವ ಸಮುದಾಯವು ಉದ್ಯೋಗಕ್ಕಾಗಿ ಕಂಪನಿಗಳನ್ನು ಹುಡುಕುತ್ತಾ ದೂರದ ಊರುಗಳನ್ನು ಅಲೆಯುವ ಸಂಕಷ್ಟವನ್ನು ತಪ್ಪಿಸಿ ಒಂದೇ ಕೇಂದ್ರದಲ್ಲಿ ಉದ್ಯೋಗದಾತ ಕಂಪನಿಗಳನ್ನು ಬರಮಾಡಿಕೊಂಡು ಬೃಹತ್ತಾದ ಉಚಿತ ಉದ್ಯೋಗ ಮೇಳವನ್ನು ಸಂಘಟಿಸಲಾಗಿದ್ದು ಉದ್ಯೋಗಕಾಂಕ್ಷಿ ಯುವಕ ಯುವತಿಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಮನವಿ ಮಾಡಿಕೊಂಡಿದ್ದಾರೆ.






















































